ಲೇಬಲ್‌ಗಳು

ಶನಿವಾರ 24 ಸಪ್ಟೆಂಬರ್ 2011

ಬಣ್ಣಾ ... ನೀಡು ಹೆಣ್ಣೇ

ಬಣ್ಣಾ ... ನೀಡು ಹೆಣ್ಣೇ, ಬಣ್ಣಾ ... ನೀಡು ಹೆಣ್ಣೇ
ನನ್ನ ಹೃದಯದಾ ಕಣ್ಣಿಗೆ....
ಬಣ್ಣಾ ... ನೀಡು ಹೆಣ್ಣೇ, ಬಣ್ಣಾ ... ನೀಡು ಹೆಣ್ಣೇ
ನನ್ನ ಕಣ್ಣಿನಾ ಕನಸಿಗೆ .....
ಬಣ್ಣಾ ... ನೀಡು ಹೆಣ್ಣೇ, ಬಣ್ಣಾ ... ನೀಡು ಹೆಣ್ಣೇ
ನನ್ನ ಕನಸಿನ;  ನಿನ್ನ  ನೆನಪಿಗೆ ....

ಹೃದಯವು ಒಳಾಗೊಯ್ತು,
ಕಣ್ಣೆರಡು ಕಾಣದಾಯ್ತು,
ನೀ ಬಾರದೆ ... ಬಳಿ ಬಾರದೇ....
ಕನಸೆಲ್ಲ  ಕಮರಿ ಹೋಯ್ತು ,
ನೆನಪೆಲ್ಲ  ಮಾಸಿಹೊಯ್ತು ,
ನೀ ಬಾರದೇ.... ನೆನಪಾಗದೆ ...


ಹೃದಯದಾ ಕಣ್ಣಲ್ಲಿ... ಕನಸಿನಾ  ನೆನಪಲ್ಲಿ ... 
ಕಟ್ಟಿರುವ  ಅರಮನೆಯನ್ನ ...
ಬಂದೊಮ್ಮೆ  ಹೋಗು ...  
ಮಹಾರಾಣಿಯಾಗಿ .... ಮನದರಸಿ ಯಾಗಿ ...
  
ಬದುಕಿನಾ ಪುಸ್ತ್ತಕದಿ ... ಮುಖಪುಟದ  ಹಾಳೆಯು ನಾನು ...
ನೀ ಬರದೆ  ಕಾಲಿಯಾಗೆ  ಉಳಿದಿರುವೆ ಇನ್ನೂ  ...
ನೀ ಬಂದು ಒಮ್ಮೆಯಾದ್ರು  ರಂಗನ್ನು  ನೀಡು ...
ಬಣ್ಣಾ ... ನೀಡು ಹೆಣ್ಣೇ, ಬಣ್ಣಾ ... ನೀಡು ಹೆಣ್ಣೇ...............




----> ಕಿರಣ್ ಎಂ ಎಸ್



ಕನಕಳ ಕಣ್ಣು

ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ರೆ ಕನ್ಕ (ಕೇಳ್ತಾಳೆ)
ಪರಪಂಚ್ದಾಗ್ ಏನೈತೆ ಗೊತ್ತೆನ್ಲ ಸಂತ?
ಹುಡುಗೀಯ ಕಣ್ಣಲ್ಲಿ ಅಡಗೈತೆ ಸೆಳೆತ,
ದೇವ್ರುನ್ನ ನೆನಸ್ಕೊಂಡು ಹೊಗಳೋದು ಮಾತ್ಗ.

ಬರಿ ನಾವು ಇದ್ದಿದ್ರೆ ಬೇಕೇನ್ಲ ಮದ್ದು,
ಮನಸ್ನಾಗೆ ವಿಷವ್ಯಾಕ ಬರ್ತಿತ್ತ್ಲ ಕದ್ದು.
ಅವಳ್ ನೋಟ್ದಾಗ್ ಕಳ್ದೋದೆ,
ಹಸಿವೆನಾ ಮರತೋದೆ,
ಅದ್ಕೀಗ ಡಾಕ್ಟ್ರತ್ರ ಹೋಗ್ಬೇಕೋ, ಪೆದ್ದು.

ಸಂಜಾದ್ರ ನಡಿತೀಯ ಹರ್ಷ ಬಾರ್ ಹತ್ರ,
ಪ್ರೀತಿಂದ ಅವ್ನ್ಗಾದ್ರು ಬರಿಬಾರ್ದ ಪತ್ರ.
ರಾತ್ರ್ಯಾಕೋ ಆಗ್ತೈತೆ,
ನಾಳ್ಯಾಕೋ ಬರ್ತೈತೆ.
ಮತ್ನಾಳೆ ಸಂಜಾಗೋದ್ ಕುಡ್ಯೋಕ್ಕೆ ಮಾತ್ರ.

---- ಮೋಹನ ಚಂದ್ರಶೇಖರಯ್ಯ

ಗುರುವಾರ 22 ಸಪ್ಟೆಂಬರ್ 2011

ಜಯಿಸುವೆ ನೀ (ನೀ ಜಗದ ಐಸಿರಿ)

ಜನಿಸಿದೆ ನೀ ಕಗ್ಗತ್ತಲ ಕೋಣೆಯಲಿ,
ಕಾರ್ಮೋಡ ಕಂಗೊಳಿಸುವ ಕಾಲದಲಿ,
ನೀತಿ ಶಾಸ್ತ್ರವ ಪಠಿಸಿ,
ಜೇವ ಪೀಠದಲಿ ನಟಿಸಿ,
ಕಳೆದೆ ನೀ ಕಾಲವನು ದುರ್ದೈವ ದಿಸೆಯಲ್ಲಿ.

ನಡೆದೆ ನೀ ದಾರಿಯಲಿ
ಉರಿಬಿಸಿಲ ಬೇಗೆಯಲಿ
ತಲೆ ತಗ್ಗಿ, ಬೆನು ಬಗ್ಗಿ
ಹಾಡಿ ನೇಸರ ಸುಗ್ಗಿ,
ಕಂಡೆ ನೀ ಇಹಪರರ ಪೀತಾಂಜಲಿ.

ಬರೆದೆ ನೀ ಭಾಗ್ಯವನ್ನು,
ಕಳೆ ಕಳಂಕ ಚರಿತೆಯನು,
ನಾಳೆ ಕಂಡೆ ಹಸಿರು,
ಇಹುದೆ ನಾಳೆ ಉಸಿರು.
   ಜಯಿಸುವೆ ನೀ ಇಂದು,
   ನೀ ಜಗದ ಐಸಿರಿ.

ನಾಚಿ ತಲೆ ಬಾಗದಿರು,
ಸೋತು ಮೊರೆ ಹೋಗದಿರು.
ನಾಳೆ ಬರುವುದರ ಮುನ್ನ
ಇಂದೆನೆಂದು ತಿಳಿದು.
ಕಳೆದು ಹೋಗದಿರು, ಜೀವೈಕ್ಯವಾಗುತಿರು.
   ಜಯಿಸುವೆ ನೀ,
   ನಿ ಈ ಜಗದ ಐಸಿರಿ.


---- ಮೋಹನ ಚಂದ್ರಶೇಖರಯ್ಯ

ಮಂಗಳವಾರ 20 ಸಪ್ಟೆಂಬರ್ 2011

ಪಡುವಣ ಪರಪಂಚ

ಮೊನ್ನೆ, ನೆನ್ನೆ, ನಾಳೆ, ನಾಳಿದ್ದು
ಜಾರುತಿದೆ ದಿನದಿಂದ ದಿನಕೆ.
ಮಂದಗತಿಯ ಕಿರುಹೆಜ್ಜೆಯಂತೆ
ಸೇರುತಿದೆ ಕಾಲಚರಿತ್ರೆಯಲ್ಲಿ
ಅಕ್ಷರ, ಪದ, ಸಾಲುಗಳಂತೆ.

ನೆನ್ನೆಗಳೆಲ್ಲ ನೆನಪಾಗಿ,
ನಾಳೆಗಳೆಲ್ಲ ಕನಸಾಗಿ
ಇಂದು ಇದ್ದು ಇಲ್ಲದಂತಾಗಿದೆ.

ಸಾಧನೆಗಳೆಲ್ಲ ಬೆಳಕಾಗಿ
ಬದುಕು ನೆರಳಾಗಿ
ಮಸಣದ ಮನೆಯೆಡೆಗೆ ಸಾಗಿದೆ.

ಕಣ್ಣಿನಲ್ಲಿ ಕನಸು ರಂಗಾಗಿ
ಮನಸು ಕಂಗಾಲಾಗಿ
ಪ್ರೀತಿ ಮರೀಚಿಕೆಯಾಗಿದೆ

        ಹಳೆತನಕ್ಕೆ ಹೊಸತನ
        ಮಾಸಿದ ನೆನಪು-ಕನಸುಗಳಿಗೆ
        ಬೇಕಾಗಿದೆ ಬಣ್ಣ.


-----> ಕಿರಣ್ ಎಂ ಎಸ್

ಶುಕ್ರವಾರ 9 ಸಪ್ಟೆಂಬರ್ 2011

ಕಿರಣ

ಮುಂಜಾನೆಯ ಮೊಬ್ಬಿನಲಿ ಮಡಿಯುಟ್ಟು,
ದೇವರ ದೀವಿಗೆಯ ಹಚ್ಚುವಾಗ,
ದೀಪದಿಂದ ಉದ್ಬವಿಸಿ,
ಕಣ್ಣುಗಳಲ್ಲಿ ಪ್ರಜ್ವಲಿಸುವ ಕಿರಣ.


-----> ಕಿರಣ್ . ಎಂ . ಎಸ್